ಕತ್ತಲ ರಾಣಿ

ನಟ್ಟ ನಡು ಇರುಳಲ್ಲಿ ಅರಳಿದ ಹೂವು
ನೆಟ್ಟ ಬಾವುಟದಲ್ಲಿ ಹೆಪ್ಪೊಡೆದ ನೋವು
ನಡುವೆ ಉರಳುವ ಚಕ್ರ ಚಲನೆ
ಸಾವಯವ ಮೈಮಾಟದಲ್ಲಿ
ಭಾವ ಬುದ್ಧಿಗಳ ಕೂಟದಲ್ಲಿ
ಕತ್ತಲ ರಾಣಿಯ ಮಿಂಚಿನ ಪ್ರತಿಮೆ!

ಕುಶಲವೆ ನನ್ನ ಕತ್ತಲ ರಾಣಿ?
ವಸಾಹತುವಿನ ಹುತ್ತದಲ್ಲಿ
ವಿಷವಿಲ್ಲದ ಚಿತ್ತದಲ್ಲಿ
ಚಿತ್ತಾರ ಬಿಡಿಸಿದ್ದು ಹೇಗೆ ನೀನು!
ಅವರು ಕೊಟ್ಟ ಅಂಗಿ ಎಸೆದು
ಹೊಸ ಹುಟ್ಟಿನ ಪುಂಗಿ ಮಿಡಿದು
ಕಾಯುತ್ತಿದ್ದೆ ನಿನಗಾಗಿ ನಾನು.

ಕತ್ತಲ ಕೋಣೆಯಲ್ಲಿ ಕತ್ತಲದವಳೆ
ಪರಂಗಿಯ ರಂಗಿನಾಟದಿಂದ ಹೊರಬಂದವಳೆ
ಮಿಂಚಲ್ಲಿ ಮಿಂದು ನಗೆಯಲ್ಲಿ ನಿಂದವಳೆ
ನೀ ನಕ್ಕ ಚುಕ್ಕಿ ಚಂದ್ರಮ ನಿನ್ನದೆ?
ನಡು ಬಳಸುವ ಸ್ವಾತಂತ್ರ ನನ್ನದೆ?

ಹೇಳು ಕತ್ತಲ ರಾಣಿ ಹೇಳು
ಸ್ವಾತಂತ್ರ್ಯವೆನ್ನುವುದು ಹುಸಿನಗೆಯ ವಯಾರವೆ?
ನಡುರಾತ್ರಿಯ ಕೃತಕ ಸಂಚಾರವೆ?

ಕಟ್ಟು ಕಳಚಿದ ಕತ್ತಲ ರಾಣಿಗೆ
ಈ ನಾಡ ಒಡೆಯರು ಕಟ್ಟಿದ ಅರಮನೆ
ಕಂಗೊಳಿಸುವ ಕೆಳಮನೆ-ಮೇಲ್ಮನೆ!
ಬೇಡವೆ ನಿನಗೆ ಬೆಳಕಿನ ಬಡ-
ವರ ಮನೆ; ಸಂಕಟದ ಸುಳಿಯಲ್ಲಿ
ಉಕ್ಕುವ ಹಕ್ಕಿನ ಮನ.

ವಸಾಹತು ಹುತ್ತಕ್ಕಿದು ಹೊಸರೂಪವೇ ಗೆಳತಿ?
ನಡುರಾತ್ರಿಯ ಹುಟ್ಟಿಗೆ ಯಾರು ಪತಿ, ಯಾರು ಸತಿ!
ಬೆವರು ಬುಸುಗುಡುತ್ತಿದೆ ಕತ್ತಲಲ್ಲಿ
ನಿನ್ನಂತೆಯೇ ವಿಷವಿಲ್ಲದ ಚಿತ್ತದಲ್ಲಿ.

ಇಂದು ನೆನ್ನೆಗಳ ನಡುವಿನ ಈ ಮುಗಿಲು
ಹಗಲಲ್ಲಿ ಬೆಳಕು ಹುಡುಕುವ ಬದಲು
ನಿನ್ನೊಡಲ ಕಡೆದಾಗ ಕಳೆದೀತು ಬೇಗೆ
ಕತ್ತಲು ಬೆತ್ತಲಾಗದೆ ಬೆಳಕು ಬಂದೀತು ಹೇಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರಿ ಇರಬೇಕು ಬಾಳಿಗೆ
Next post ಹಾದರಗಿತ್ತಿ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys